ಡೊಳ್ಳು [Dollu]

Image 1 Image 1 Image 1 Image 1 Image 1

ಡೊಳ್ಳು [Dollu]

ಜನಪದ ಕಲೆಗಳಲ್ಲಿ ಗಂಡುಕಲೆ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮಿಸಲಾದ ಕಲೆ. ಒಳ್ಳೆಯ ಮೈಕಟ್ಠು ಮತ್ತು ಶಕ್ತಿ ಉಳ್ಳ ಕಲಾವಿದರು ಮಾತ್ರ ಈ ಕಲೆಯನ್ನು ಪ್ರದರ್ಶಿಸಬಲ್ಲರು. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಡೊಳ್ಳೂ ಕುಣಿತ ತನ್ನ ವಿಶಿಷ್ಟವಾದ ನೃತ್ಯ ಶೈಲಿಗಳಿಂದ ಉಳಿದುಕೊಂಡು ಬಂದಿದೆ. ಡೊಳ್ಳು ಕುಣಿತ- ಒಂದು ಜನಪದ ಹಾಗೂ ಶಾಸ್ತ್ರೀಯ ಕಲೆ, ನೃತ್ಯ. ಡೊಳ್ಳು ಬಾರಿಸಿಕೊಂಡು ಕುಣಿಯುವುದರಿಂದ ಇದಕ್ಕೆ ಡೊಳ್ಳು ಕುಣಿತ ಎಂಬ ಹೆಸರು.
ಡೊಳ್ಳಿನ ಇತಿಹಾಸ ಮೂಲತಃ ಕುರುಬ ಜನಾಂಗದ ವಾದ್ಯವಾಗಿರುವ ಡೊಳ್ಳು ಹಳ್ಳಿಯ ಸಂಸ್ಕೃತಿ ಜೀವನದೊಂದಿಗೆ ಸಮರಸವಾಗಿ ಬೆರೆತುಕೊಂಡಿದೆ. ಡೊಳ್ಳಿನ ಉತ್ಪತ್ತಿಯ ಬಗ್ಗೆ ಹಲವು ಕಥೆಗಳು ರೂಡಿಯಲ್ಲಿರುವುದರಿಂದ ಅದರ ಬಗ್ಗೆ ಭಕ್ತಿ ಗೌರವಗಳು ವ್ಯಕ್ತವಾಗುತ್ತದೆ. ಡೊಳ್ಳಿನ ಉತ್ಪತ್ತಿಯ ಬಗ್ಗೆ ಪೌರಣಿಕ ಹಿನ್ನೆಲೆಯ ಒಂದು ವಿಚಿತ್ರ ಕತೆ ಹಿಗೀದೇ

Bandara

Image 2

ಕಂಬಳಿ

Image 3

ಕಂಬಳಿ

ಕುರಿಯ ಹುಣ್ಣೆಯಿಂದ ಮಾಡಲ್ಪಡುವ ಕಂಬಳಿಯು ಧಾರ್ಮಿಕ ಜಗತ್ತಿನ ಶ್ರೇಷ್ಠ ವಸ್ತ್ರವಾಗಿದೆ. ಪವಿತ್ರ ಮತ್ತು ದೈವಿ ಸಂಕೇತವಾಗಿರುವ ಕಂಬಳಿಯನ್ನು ಎಲ್ಲಾ ರೀತಿಯ ಶುಭ ಕಾರ್ಯಗಳಿಗೆ ಬಳಸುತ್ತಾರೆ. ಮೈಲಿಗೆ ಇಲ್ಲದ ಏಕೈಕ ವಸ್ತ್ರ ಕಂಬಳಿಯಾಗಿದೆ. ಜೀವಂತ ಇರುವ ಕುರಿಯಿಂದ ಕತ್ತರಿಸಿದ ಹುಣ್ಣೆಯಿಂದ ತಯಾರಿಸುವ ಕಾರಣ ಕಂಬಳಿಗೆ ಜೀವಂತ ಪೀಠ ಎನ್ನುತ್ತಾರೆ. ಸಿದ್ಧ ಸಾಧಕರು, ಆಧ್ಯಾತ್ಮ ಸಾಧಕರು ತಮ್ಮ ಮನೋಸಂಕಲ್ಪದ ಈಡೇರಿಕೆಗೆ ಕಂಬಳಿಯನ್ನು ಆಸನವಾಗಿ ಬಳಸುವ ಕಾರಣ ಕಂಬಳಿಯು ಸಂಕಲ್ಪ ಸಿದ್ಧಿಕಾರಕ ಆಗಿದೆ.


ಕುರಿ

Image 3

ಕುರಿ

ಕುರಿ: ಕುರಿಯು ದೇವರ ಪ್ರತಿಕ ಎಂಬ ನಾಣ್ಣುಡಿ ಇದೆ. ಮನುಕುಲದ ಮೊದಲ ಸಾಕು ಪ್ರಾಣಿ ಕುರಿ. ದೇವಲೋಕದಲ್ಲಿ ಶಿವನ ಸನ್ನಿಧಿಯಲ್ಲಿ ಒಬ್ಬ ಕಿನ್ನರನು ನೃತ್ಯ ಮಾಡುವುದನ್ನು ನೋಡಿ ದೇವತೆಗಳು ಅಪಹಾಸ್ಯ ಮಾಡಿದಾರೆ. ಒಬ್ಬರ ಭಕ್ತಿಯನ್ನು ಅಪಹಾಸ್ಯ ಮಾಡಬಾರದು. ಆದಕಾರಣ ದೇವತೆಗಳು ಶಿವನ ಶಾಪಕ್ಕೆ ಒಳಗಾಗಿ ಭೂಲೋಕದಲ್ಲಿ ಕುರಿಗಳಾಗಿ ಜನಿಸುತ್ತಾರೆ ಎಂದು ಹೇಳಲಾಗುತ್ತದೆ. ಕುರಿಗಳನ್ನು ಸಾಕಲು ಶಿವ ಪಾರ್ವತಿಯರೇ ಭೂಮಿಗಿಳಿದು ಬರುತ್ತಾರೆ. ಕುರಿಗಳನ್ನು ಸಾಕಲು ಆಗದೆ ಅವುಗಳನ್ನು ಒಂದು ಗುಹೆಯಲ್ಲಿ ಹೂಡಿ ಹಾಕಿ ಹೋಗುತ್ತಾರೆ. ನಂತರ ಹಸಿವು, ನೀರಡಿಕೆಯಿಂದ ಕಂಗೆಟ್ಟ ಕುರಿಗಳು ಕೂಗಿಡುತ್ತವೆ. ಇವುಗಳ ಸಂಕಟವನ್ನು ತಾಳಲಾರದ ತಾಯಿ ಪಾರ್ವತಿಯ ಎದೆಯಲ್ಲಿ ಹಾಲು ಮೂಡಿ ಭೂಮಿಯ ಮೇಲೆ ಬೀಳುತ್ತವೆ. ಹಾಲಿನಿಂದ ಒದ್ದೆಯಾದ ಮಣ್ಣಿನಿಂದ ಎರಡು ಗೊಂಬೆ ಮಾಡಿ, ಶಿವನಿಂದ ಜೀವವನ್ನು ಕೊಡಿಸಿ ಮುದ್ದುಗೊಂಡ- ಮುದ್ದವ್ವೆಯೆಂದು ಹೆಸರಿಟ್ಟು ಕುರಿಗಳನ್ನು ಸಾಕಲು ಆಶೀರ್ವದಿಸುತ್ತಾರೆ. ಮುದ್ದುಗೊಂಡನ ಸಂತತಿಯಲ್ಲಿ ಬರುವ ಪದ್ಮಗೊಂಡನು ಕುರಿಗಳನ್ನು ಸಾಕುತ್ತಾನೆ. ಇದೇ ಕಾರಣಕ್ಕೆ ಕುರಿಗಳನ್ನು ದೇವರೆಂದು ಪೂಜಿಸುತ್ತಾರೆ. ಕುರಿಗಳನ್ನು ಪೂಜಿಸುವ ಹಟ್ಟಿಹಬ್ಬವೇ ಇಂದು ದೀಪಾವಳಿ ಹೆಸರಲ್ಲಿ ಆಚರಿಸಲಾಗುತ್ತಿದೆ. ಕುರಿಯ ಹುಣ್ಣೆಯಿಂದ ತಯಾರಾದ ಕಂಬಳಿಯೇ ಮಾನುಕುಲದ ಮೊದಲ ವಸ್ತ್ರವಾಗಿದೆ. ಕುರಿಯು ಮಂಗಳ ದೇವತೆಯ ವಾಹನವಾಗಿದೆ. ಟಗರು ಅಗ್ನಿ ದೇವತೆಯ ವಾಹನವಾಗಿದೆ. ಆಡು(ಅಜ) ಬ್ರಹ್ಮ ಜ್ಞಾನದ ಸಂಕೇತವಾಗಿದೆ. ಅಜಪವೇದವನ್ನು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ.

ಅಮರೇಹೂವು ಮತ್ತು ಲಕ್ಕಿಪತ್ರೆ

Image 4

ಅಮರೇಹೂವು ಮತ್ತು ಲಕ್ಕಿಪತ್ರೆ ಬೀರದೇವರಿಗೆ, ಮೈಲಾರಲಿಂಗೇಶ್ವರ ದೇವರಲ್ಲದೆ ಹಾಲುಮತದ ಎಲ್ಲಾ ದೇವರ ಪೂಜೆ ಅರ್ಚನೆಗೆ ಅಮರೇಹೂವು ಮತ್ತು ಲಕ್ಕಿಪತ್ರೆ ಶ್ರೇಷ್ಠವೆಂದು ಭಾವಿಸಿ ಬಳಸುತ್ತಾರೆ.

Sunday Programs

Image 4